Slide
Slide
Slide
previous arrow
next arrow

ರಾಜಲಕ್ಷ್ಮೀ ಭಟ್ ಬೊಮ್ನಳ್ಳಿಗೆ ‘ಸಾಹಿತ್ಯ ಸೌರಭ ಪ್ರಶಸ್ತಿ’

300x250 AD

ಶಿರಸಿ: ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನಹಡಗಲಿ , ವಿಜಯನಗರ ಜಿಲ್ಲೆ,ಇವರ ವತಿಯಿಂದ ಕನ್ನಡ ನುಡಿ ವೈಭವ 2024 ಕಾರ್ಯಕ್ರಮವನ್ನು ದಾವಣಗೆರೆಯ ಎ.ವಿ.ಕೆ ಕಾಲೇಜ್ ರೋಡ್ ನಲ್ಲಿರುವ ಜಿಲ್ಲಾ ಗುರುಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ , ಶಿಕ್ಷಣ ಸೌರಭ, ಕಲಾ ಸೌರಭ ,ಸಾಹಿತ್ಯ ಸೌರಭ ,ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿಗಳನ್ನು ಆಯ್ಕೆಯಾದ ಗಣ್ಯ ಸಾಹಿತಿಗಳಿಗೆ ನೀಡಲಾಯಿತು. ಗೊರೂರು ಅನಂತರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧು ನಾಯ್ಕ್ ಲಂಬಾಣಿ ಸಂಪಾದಕತ್ವದ ಹೂ ಮುಡಿದ ಜಡೆ ಹಾಗೂ ಶ್ರೀಮತಿ ಭಾಗ್ಯ ನಾಗರಾಜರವರ “ಚಿರು ನಕ್ಷತ್ರ” ಕೃತಿಗಳು ಲೋಕಾರ್ಪಣೆಗೊಂಡವು. ಸಮಾರಂಭದ ಗಣ್ಯರ ಸಮ್ಮುಖದಲ್ಲಿ ಶಿರಸಿಯ ಪ್ರತಿಭೆ ಶ್ರೀಮತಿ ರಾಜಲಕ್ಷ್ಮೀ ಭಟ್ ಬೊಮ್ನಳ್ಳಿ ಅವರಿಗೆ ರಾಜ್ಯಮಟ್ಟದ ಸಾಹಿತ್ಯ ಸೌರಭ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮಧು ನಾಯ್ಕ ಲಂಬಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top